ಉಳ್ಳಾಲ : ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ ನೇತೃತ್ವದಲ್ಲಿ ಸ್ಥಾನೀಯ ಮೂರು ಸಮುದಾಯಗಳ ಧರ್ಮಗುರುಗಳು ಸೇರಿ ಗಿಡ ನೆಡುವ ವಿಶೇಷ ಕಾರ್ಯಕ್ರಮ ಕಳೆದ ಸೋಮವಾರ ತೊಕ್ಕೊಟ್ಟು ಬಸ್ಸು ತಂಗುದಾನದಲ್ಲಿ ನಡೆಯಿತು.


ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಮಠ, ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಗುರು ರೆ| ಫಾ| ಜೆ.ಬಿ ಸಲ್ದಾನಾ ಮತ್ತು ತೊಕ್ಕೊಟ್ಟು ಮಸ್ಜಿದುಲ್ ಹುದಾ ಗುರು ಮೊಹಮ್ಮದ್ ಕುಂಞ ಹಾಗೂ ಸ್ಥಳೀಯ ರಾಜಕೀಯ, ಸಾಮಾಜಿಕ ನೇತಾರರು ಸೇರಿ ತೊಕ್ಕೊಟ್ಟು ಬಸ್ಸು ತಂಗುದಾನ ವೃತ್ತದಲ್ಲಿ ಗಿಡ ನೆಟ್ಟು ಪ್ರಕೃತಿ ಪ್ರಿಯತೆಯನ್ನು ಮೆರೆದರು. ಮಾಧವ್ ಉಳ್ಳಾಲ್ ಅತಿಥಿüಗಳನ್ನು ಸ್ವಾಗತಿಸಿದರು.ಅರುಣ್ ಉಳ್ಳಾಲ್ ವಂದಿಸಿರು.
