ಸುದ್ದಿ9 ಕಿನ್ನಿಗೋಳಿ ;ಭಾರತ ದೇಶದಲ್ಲಿನ ಗಡಿಯ ಸಮಸ್ಯೆ, ದೇಶದೊಳಗೆ ನುಗ್ಗುವ ನುಸುಳುಕೋರರು ಕಾಶ್ಮಿರದಂತಹ ಜ್ವಲಂತ ಸಮಸ್ಯೆಗಳಿಗೆ ಉತ್ತರ ನೀಡಲು ಹಾಗೂ ಪಾರದರ್ಶಕ ಅಭಿವೃದ್ದಿಪರ ರಾಷ್ಟ್ರ ನಿಮರ್ಾಣಕ್ಕೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕರ ಅಗತ್ಯವಿದೆ. ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಹೇಳಿದರು.
ಶನಿವಾರ ಕಿನ್ನಿಗೋಳಿಯ ಅನುಗ್ರಹ ವಾಣಿಜ್ಯ ಸಂಕೀರ್ಣದಲ್ಲಿ ಬಿಜೆಪಿ ಪಕ್ಷದ ಕಿನ್ನಿಗೋಳಿ- ಮೆನ್ನಬೆಟ್ಟು ಕಾರ್ಯಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು .

ಹಿರಿಯ ಬಿಜೆಪಿ ಕಾರ್ಯಕರ್ತ ವಾಸುದೇವ ರಾಮ ಕಾಮತ್ ದೀಪ ಬೆಳಗಿಸಿ ಕಾರ್ಯಲಯ ಉದ್ಘಾಟಿಸಿದರು.
ಬಿಜೆಪಿಯ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಕೆ. ಆರ್. ಪಂಡಿತ್, ಬಿಜೆಪಿ ಮುಖಂಡರಾದ ಭುವನಾಭಿರಾಮ ಉಡುಪ, ಉಮನಾಥ ಕೋಟ್ಯಾನ್, ಜಿ. ಪಂ. ಉಪಾಧ್ಯಕ್ಷ ರಿತೇಶ್ ಶೆಟ್ಟಿ, ದ.ಕ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಲ್ಕಿ ಮೂಡಬಿದ್ರಿ ಮಂಡಲ ಅಧ್ಯಕ್ಷ ಸುಚರಿತ ಶೆಟ್ಟಿ , ಮೈಪಾಲ್ ರೆಡ್ಡಿ , ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಆಶಾ ರತ್ನಾಕರ ಸುವರ್ಣ, ಕೊಳುವೈಲು ಸತೀಶ್ ಭಟ್, ರಮಾನಾಥ ಆತ್ತಾರ್, ತಾ. ಪಂ. ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸುದರ್ಶನ್, ಮೂಲ್ಕಿ ಮೂಡಬಿದ್ರಿ ಬಿಜೆಪಿ ಪ್ರದಾನ ಕಾರ್ಯಲಯ ದೇವಿಪ್ರಸಾದ್ ಪುನರೂರು, ನಾಗಾರಾಜ ಪೂಜಾರಿ, ಸರೋಜಿನಿ, ಲೀಲಾ ಭಂಜನ್, ನಾಮದೇವ ಕಾಮತ್, ರಘುವೀರ್ ಕಾಮತ್, ಪ್ರತೀಕ್ ಶೆಟ್ಟಿ , ವಿನೋದ್ ಬೊಳ್ಳೂರು, ಅರುಣ್ ಕುಮಾರ್, ಜಯಶಂಕರ್ ರೈ, ರಘುರಾಮ ಪುನರೂರು ಮತ್ತಿತರರು ಉಪಸ್ಥಿತರಿದ್ದರು.
