ಸುದ್ದಿ9 ಕೈಕಂಬ: ಬಡಗಬೆಳ್ಳೂರು ಕುಕ್ಕಾಜೆಯಲ್ಲಿ ಶ್ರೀಮತಿ ಮತ್ತು ಶ್ರೀ ಕೃಷ್ಣ ಪೂಜಾರಿ ಅರ್ಬಿ ಮನೆ ಯಲ್ಲಿ ಸಂಭ್ರಮದ ಹರಕೆಯ ಗುಳಿಗ ಕೋಲ ಬಲಿ ಮಾರ್ಚ್ 20ರಂದು ಗುರುವಾರ ನೆರವೇರಿತು. ಹಲವು ವರ್ಷಗಳಿಂದ ಅರ್ಬಿಮನೆಯಲ್ಲಿ ಕುಟುಂಬಸ್ಥರು ನಂಬಿಕೊಂಡು ಬಂದಿರುವ ಗುಳಿಗ ದೈವ ಬಹಳ ಕಾರ್ನಿಕವನ್ನು ಹೊಂದಿದ್ದು ಇಷ್ಟಾರ್ಥಗಳನ್ನು ಸಿದ್ಧಿಸುವ ದೈವವಾಗಿದೆ.





