ಸುದ್ದಿ9 ಕೈಕಂಬ: ಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂರ್ತಿ , ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಜ.23 ಶುಕ್ರವಾರದಿಂದ ಜ.25ರ ಭಾನುವಾರದವರೇಗೆ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಸೋತ್ಸವ ಜರಗಲಿದೆ. 23ರಂದು ಶುಕ್ರವಾರ ಸಾಯಂಕಾಲ 3ಗಂಟೆಗೆ ಹೊರೆಕಾಣಿಕೆ ಯು ಬೆಂಜನಪದವು ಶ್ರೀ ಭದ್ರಕಾಳಿದೇವಸ್ಥಾನದಲ್ಲಿ ಪೂಜೆಮಾಡಿ ಅಲ್ಲಿಂದ ಅಡ್ಡೂರು ಗಣೇಶ್ ಕಟ್ಟೆಗೆ ಬಂದು ವೈಭವದಿಂದ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಲಾಗುವುದು. ಸಂಜೆ 5ರಂದ ಪ್ರಾಸಾದ ಪರಿಗ್ರಹ, ಪ್ರಾಥನೆ ಪುಣ್ಯಾಹ ,ಸಪ್ತಶುದ್ಧಿ,ಭೂಶುದ್ಧಿ, ರಾಕ್ಷೊಘ್ನ ಹೋಮ ,ವಾಸ್ತು ಪೂಜೆ, ದಿಶಾಬಲಿ ನಡೆಯಲಿದೆ.
ಜ. 24ರಂದು ಶನಿವಾರ:
ಬೆಳಗ್ಗೆ 7 ರಿಂದಗಣಪತಿ ಹೋಮಮಂಚ ಬಿಂಬಗಳ ಶುದ್ಧಿ, ನಾಗಸನ್ನಿಧಿಯಲ್ಲಿ ಕಲಾಶಾಭಿಷೇಕ, ಹಾಗೂ ಆಶ್ಲೇಷಬಲಿ ಸಂಜೆ ಘಂಟೆ 4ರಿಂದಮಂಚ ಬಿಂಬಾಧಿವಾಸ,ಕಲಶಾಧಿವಾಸ,ಅಧಿವಾಸಹೋಮಗಳು ನಡೆಯಲಿದೆ.
25ರಂದು ಭಾನುವಾರ:
ಬೆಳಗ್ಗೆ 6 ಗಂಟೆಗೆ ಪ್ರತಿಷ್ಠಾ ಹೋಮ, 8.16ಕ್ಕೆ ದ್ಯೆವಗಳ ಪ್ರತಿಷ್ಠೆ, ಪ್ರತಿಷ್ಠಾಕಲಶಾಭಿಷೇಕ,ಹಾಗೂ ಬ್ರಹ್ಮಕಲಶಾಭಿಷೇಕ,ಬೆಳಗ್ಗೆ 10 ಗಂಟೆಗೆ ಶ್ರೀವಯನಾಡ್ಕುಲವನ್, ಶ್ರೀ ವಿಷ್ಣುಮೂರ್ತಿ ಪರಿವಾರ ದೈವಗಳ “ಪೀಠಪ್ರತಿಷ್ಠೆ”
ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ 1 ಗಂಟೆಗೆ ಅನ್ನಸಂತರ್ಪಣೆ ಸಂಜೆ 5 ಗಂಟೆಗೆ ಸಭಾಕಾರ್ಯಕ್ರಮ. ಸಂಜೆ 7ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಶ್ರೀ ಅರಸು ದೈವ. ಶ್ರೀ ಧೂಮವತಿ ಬಂಟ,ಮಹಿಷಾಂದಾಯ ದೈವಗಳ “ನೇಮೋತ್ಸವ” ರಾತಿ ಗಂಟೆ 12 ರಿಂದ ಬೆಳಗ್ಗೆ 4 ಗಂಟೆಯವರೆಗೆ ಶ್ರೀ ವಯನಾಡ್ ಕುಲವನ್ <ಶ್ರೀ ವಿಷ್ಣುಮೂರ್ತಿ ದೈವಗಳ ದರ್ಶನ ತದನಂತರ ಶ್ರೀ ವಿಷ್ಣುಮೂತರ್ಿ ದೈವದ ಬಯಲು ಕೋಲ ಪ್ರಸಾದ ವಿತರಣೆ ನಡೆಯಲಿದೆ ಎಂದು ನಂದ್ಯ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಕಟನೆ ತಿಳಿಸಿದೆ.



