ಹಿಂದೂ ಸಂಗಮ ಮುಗಿದ ಬಳಿಕ ನಡೆದ ಘಟನೆ
ಉಪ್ಪಿನಂಗಡಿ: ಪುತ್ತೂರಿನಲ್ಲಿ ಹಿಂದೂ ಸಮಾವೇಶ ಮುಗಿಸಿ ಬರುತ್ತಿದ್ದವರ ಮೇಲೆ ಒಂದು ಕೋಮಿನ ದುಷ್ಕರ್ಮಿಗಳು ಕಲ್ಲೆಸೆದ ಪರಿಣಾಮ ಉಂಟಾದ ಗಲಾಟೆಯಿಂದ ಉಪ್ಪಿನಂಗಡಿ ಉದ್ವಿಗ್ನ ಸ್ಥಿತಿಗೆ ತಲುಪಿತ್ತು. ಇದಕ್ಕೆ ಪ್ರತಿಯಾಗಿ ಮತ್ತೊಂದು ಕೋಮಿನ ದುಷ್ಕರ್ಮಿಗಳು ಮಸೀದಿಗೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ.

ಘಟನೆಯಿಂದ ಎರಡೂ ಕೋಮಿನ ಹಲವರಿಗೆ ಗಾಯಗಳಾಗಿದ್ದು ಅವರೆಲ್ಲರನ್ನೂ ಪುತ್ತೂರು ಹಾಗೂ ಬೆಳ್ತಂಗಡಿಯ ನಾನಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮಾಹಿತಿ ಅರಿತ ಉಪ್ಪಿನಂಗಡಿ ಪೊಲೀಸರು ಹಾಗೂ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ನ ತಂಡವು ಸ್ಥಳಕ್ಕೆ ಧಾವಿಸಿ ಲಘುಲಾಠಿಪ್ರಹಾರ ನಡೆಸಿ ಸೇರಿದವರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ತಿಳಿದು ಬಂದಿದೆ.

