ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ 14-17ವಯೋಮಿತಿಯ ಪ್ರಾಥಮಿಕ ಪ್ರೌಢಶಾಲಾ ಬಾಲಕ ಬಾಲಕಿಯರ            ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆ 2026-27   ಸುಳ್ಯದ  ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಬೆಳ್ಳಾರೆಯಲ್ಲಿ ನಡೆದ  ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಜಪೆ ಬೆಥನಿ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ನ 9ನೇ ತರಗತಿಯ ವಿದ್ಯಾರ್ಥಿ  ಅನಿಕೇತ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಅವರು ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜಪೆಯಲ್ಲಿ ತರಬೇತಿ ನೀಡುತ್ತಿರುವ ಶರತ್ ಪೂಜಾರಿ ಕರಿಕಟ್ಟ ಇವರ ಶಿ‌ಷ್ಯ ಪ್ರಸ್ತುತ ಬಜಪೆಯಲ್ಲಿ  ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರು ಸುಂಕದಕಟ್ಟೆ ಸುಮುಖ ಸ್ಠುಡಿಯೋ ಇದರ ಮಾಲಕರಾದ ಲಕ್ಷ್ಮಿಕಾಂತ್ ಮತ್ತು ಹರೀಣಿ ದಂಪತಿಯ ಪುತ್ರ .

By Suddi9

Leave a Reply

Your email address will not be published. Required fields are marked *