ಬಂಟ್ವಾಳ : ರಾಜ್ಯ ಸರ್ಕಾರದ ನಿರ್ಧೇಶನದಂತೆ 2026-27 ಸಾಲಿಗೆ ನೂತನ ತಾಲೂಕು ಮಟ್ಟದ ರೈತರ ಸಲಹಾ ಸಮಿತಿಗೆ ಅಬುಬಕ್ಕರ್ ಅಮ್ಮುಂಜೆ ಆಯ್ಕೆ.

ಬಂಟ್ವಾಳ ತಾಲೂಕು ಕೃಷಿ ಇಲಾಖೆಯ ಕಚೇರಿಯಲ್ಲಿ ಜು.30ರಂದು ಗುರುವಾರ ಕೃಷಿ ತೋಟಗಾರಿಕೆ ಇಲಾಖೆಯ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ರೈತರ ಸಲಹಾ ಸಮಿತಿಯ ಸಭೆಯಲ್ಲಿ ರೈತರ ಪ್ರತಿನಿಧಿಗಳ ಸಮ್ಮುಖದಲ್ಲಿ ಸಮಿತಿಯ ರಚನೆ ಪ್ರಕ್ರಿಯೆ ನಡೆಸಲಾಯಿತು.
ಬಂಟ್ವಾಳ ತಾಲೂಕು ರೈತರ ಸಲಹಾ ಸಮಿತಿಯ ಅಧ್ಯಕ್ಷರಾಗಿ ಅಬುಬಕ್ಕರ್ ಅಮ್ಮುಂಜೆ ಅವರನ್ನು ಆಯ್ಕೆ ಮಾಡಲಾಯಿತು.
