ಬಂಟ್ವಾಳ ಶಾಶಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಅನುದಾನದಿಂದ ಸುಸಜ್ಜಿತವಾಗಿ ನಿರ್ಮಾಣ ಆಗುತ್ತಿರುವ ಕಾರಾಂಬಲ್ಲೆ -ಬಂಟ್ರಿಂಜಾ “ಶ್ರೀ ಉಳ್ಳಾಲ್ತಿ ಮಾಡ” ಸರ್ವಋತು ರಸ್ತೆಯನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು

ಉಳ್ಳಾಲ್ಥಿ ದೈವಸ್ಥಾನದ ಆಡಳಿತ ಮುಕ್ತೇಸರರಾದ ಮೋಹನ್ ಪೈ, ಕರಿಂಕ ದೇವಾಲಯದ ಆಡಳಿತ ಮುಕ್ತೇಸರರಾದ ನರೇಂದ್ರ ರೈ, ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಮಾವೆ ಕಾಯಿ ಹೊಡೆದು ರಸ್ತೆಯನ್ನು ಲೋಕಾರ್ಪಣೆಗೈದರು. ಎಮ್ ಪಿ ಪೈ ಮತ್ತು ರಾಮಕೃಷ್ಣ ರೈ ಅವರು ಈ ರಸ್ತೆಗೆ ಜಮೀನುಒದಗಿಸಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಲಾಯಿತು.
ತುಂಬೆಕೋಡಿ ಬಾಲಕೃಷ್ಣ ಶೆಟ್ಟಿ, ಮೋನಪ್ಪ ಗೌಡ ತಾರಿಪಡ್ಪು,ನಾರಾಯಣ ಶೆಟ್ಟಿ ಪುಣ್ಕೇದಡಿ,ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ,ಬಿಜೆಪಿ ಮಾಣಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ ಮುರ್ಜೆಬೆಟ್ಟು, ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ,ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷೆ ಸಂಧ್ಯಾ,ನಿಕಟಪೂರ್ವ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಟ್ರಿಂಜಾ,ಉಪಾಧ್ಯಕ್ಷ ಕುಸುಮಾಧರ,ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಗೀತಾ,ಶಕ್ತಿ ಕೇಂದ್ರ ಪ್ರಮುಖ್ ಮಹಾಬಲ ಪೂಜಾರಿ, ಬೂತ್ ಅಧ್ಯಕ್ಷರಾದ ರಮೇಶ್ ಗೌಡ, ನಾರಾಯಣ ಗೌಡ, ಕಾರ್ಯದರ್ಶಿಗಳಾದ ಅಶೋಕ್, ಕೇಶವ ಕಿದೆನಾರ್,ಶಶಿಕಾಂತ್ ಶೆಟ್ಟಿ,ನವೀನ್ ಶೆಟ್ಟಿ ಪುಣ್ಕೇದಡಿ, ಸೊಸೈಟಿ ಉಪಾಧ್ಯಕ್ಷ ತನಿಯಪ್ಪ ಗೌಡ,ನಿರ್ದೇಶಕ ಶ್ವೆಕಟೇಶ್ ಕೋಟ್ಯಾನ್, ಕಿರಣ್ ಪೂಜಾರಿ, ಜಯಂತಿ,ಪದ್ಮಾವತಿ ಶೋಭಾ, ಪ್ರೇಮ, ರಮೇಶ್ ಪೋಯ್ಯ, ವಂದನಾ, ಅರವಿಂದ್ ಕೊಂಡೆ, ಸಂಜೀವ ಮಡಿವಾಳ, ಕಿರಣ್ ಬಂಟ್ರಿಂಜ ತಿಮ್ಮಪ್ಪ ಗೌಡ ನಿತಿನ್ ರೈ, ರಾಮಕೃಷ್ಣ ಗೌಡ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
ಇದೇ ವೇಳೆ ಸಹಕರಿಸಿದ ವೆಂಕಪ್ಪ ಗೌಡ, ದಯಾನಂದಮಡಿವಾಳ ಸುಮತಿ ಮಡಿವಾಲ್, ಬಾಲಕೃಷ್ಣ ಮಡಿವಾಳ್ ಅವರನ್ನು ಗೌರವಿಸಲಾಯಿತು.
