ಶಾಸಕ ಡಾ. ಭರತ್ ಶೆಟ್ಟಿ ಭೇಟಿ
ಕೈಕಂಬ: ಗುರುಪುರ ಮಠದಗುಡ್ಡೆಯ ಎಸ್ಸಿ ಕಾಲೊನಿಗೆ ಶನಿವಾರ(ಜ. ೧೪) ಭೇಟಿ ನೀಡಿದ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಇತ್ತೀಚೆಗೆ ಸಂಭವಿಸಿದ ವಾಹನ ಅಪಘಾತವೊಂದರಲ್ಲಿ ಕಾಲಿಗೆ ಗಾಯಗೊಂಡ ನಾಗೇಶ್ ಅವರ ಯೋಗಕ್ಷೇಮ ವಿಚಾರಿಸಿದರು.

ಇದೇ ವೇಳೆ ನಾಲ್ಕೆÊದು ತಿಂಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಸಾವಿಗೀಡಾದ ವಾರಿಜಾ ಎಂಬವರ ಪುತ್ರಿ ರಾಜೀವಿಯವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಳಿಕ ಡೊಂಬಯ್ಯ ಮತ್ತು ಸೇಸಿ ಎಂಬವರ ಎರಡು ಮನೆಗಳಿಗೆ ತೆರಳಿ ಅವರ ಪುತ್ರಿಯರ ವಿವಾಹಕ್ಕೆ ಶುಭ ಹಾರೈಸಿದರು.
