ಕಲ್ಲಡ್ಕ: ಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಿರಣ್ಮಯಿ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ನೀಡುವುದರ ಮೂಲಕ ಸಸಿ ನೆಟ್ಟು ನೀರುಣಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಗೋಪಾಲ್ ಶಣೈ, ಹಿರಿಯ ಅಧ್ಯಾಪಕರಾದ ಗೋಪಾಲ್ ಎಂ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿ, ಪರಿಸರ ದಿನದ ಘೋಷಣೆಗಳನ್ನು ಕೂಗಿ ಖುಷಿಪಟ್ಟರು. ವಿದ್ಯಾರ್ಥಿಗಳಾದ ಭೂಷಣ್ ಪರಿಸರ ದಿನದ ಮಹತ್ವವನ್ನು ತಿಳಿಸಿ, ಅನುಷಾ ಕಾರ್ಯಕ್ರಮ ನಿರೂಪಿಸಿ, ಅನುಷಾ ಆಳ್ವ ಸ್ವಾಗತಿಸಿ, ಶ್ರಮಿಕ ವಂದಿಸಿದಳು. ಅತಿಥಿಗಳು ಶಾಲಾ ವನದಲ್ಲಿ ಗಿಡ ನೆಟ್ಟು ನೀರುಣಿಸಿ ಮಾದರಿಯಾದರು.
