ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿನೇಮೋತ್ಸವದ ಪ್ರಯುಕ್ತ ಫೆ ೧೬ರಂದು ಬುಧವಾರ ಬೆಳಿಗ್ಗೆ ಬಿಂಬ ಶುದ್ದಿ, ಕಲಾಶಾಭಿಷೇಕ, ಅಧಿವಾಸ ಹೋಮ ನಡೆಯಲಿದೆ.
ಸಂಜೆ ಡ್ಯಾನ್ಸ್ ಅಕಾಡೆಮಿ ಎಡಪದವು ಇವರಿಂದ ‘ನೃತ್ಯ ಗಾನವೈಭವ’ ಹಾಗೂ ರಾಜಶ್ರೀ ಮೋಕೆದ ಕಲಾವಿದೆರ್ ಪೊಳಲಿ ಇವರಿಂದ ‘ಬಂಗಾರ್ ಬಾಬು’ ತುಳು ಹಾಸ್ಯ ನಾಟಕ ನಡೆಯಲಿದೆ.
