ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿನೇಮೋತ್ಸವದ ಪ್ರಯುಕ್ತ ಫೆ. ೧೫ರಂದು ಮಂಗಳವಾರ ಸಂಜೆ ೩. ೩೦ ಗಂಟೆಗೆಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಾಚೈತನ್ಯಾನಂದ ಅವರು ದೀಪ ಬೆಳಗಿಸಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಹಸಿರು ಹೊರೆಕಾಣಿಕೆ ಮೆರವಣಿಗೆಯು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಿಂದ ಹೊರಟು ಪುಂಚಮೆ ಮಾರ್ಗವಾಗಿ ದೈವಸ್ಥಾನಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸುಕೇಶ್ ಚೌಟ ಬಡಕಬೈಲು, ಚಂದ್ರಶೇಖರ ಶೆಟ್ಟಿ ಬಡಕಬೈಲು, ಕಾರ್ಯದರ್ಶಿ ಶೇಖರ ಬಂಗೇರ ಗಾಣೆಮಾರ್, ಪ್ರಧಾನ ಕಾರ್ಯದರ್ಶಿ ದೇವದಾಸ್ ಅಯರೆಮಾರ್, ಕರಿಯಂಗಳ ಗ್ರಾಮ ಪಂ.ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ, ವೆಂಕಟೇಶ್ ನಾವುಡ ಪೊಳಲಿ, ಶ್ರೀಕರ ಶೆಟ್ಟಿ ಬೊಳಿಯಾರು, ಉಮೇಶ್ ಸಾಲ್ಯಾನ್ ಬೆಂಜನಪದವು, ಸಂಕಪ್ಪ ಶೇಖ ಬಡಕಬೈಲು, ನಾರಾಯಣ ಪೂಜಾರಿ ಆಯರೆಮಾರ್,ಗೋಪಾಲ ಅಂಚನ್ ಬಡಕಬೈಲು, ನಾರಾಯಣ ಬಿ. ಬಡಕಬೈಲು, ಶ್ರೀ ದೇವಪ್ಪ ಭಂಡಾರಿ ಪುಂಚಮೆ, ವಾಮನ ಪೂಚಾರಿ ಮೀಯಾಳ, ಉವಯ್ಯ ಪೂಜಾರಿ ಆಯರೆಮಾರ್, ಕೋಟ್ಯಪ್ಪ ಟೈಲರ್ ಬಡಕಬೈಲು, ವಾಮನ ಪೂಜಾರಿ ಸೂರ್ಲ ಮಣಿಕಂಠಪುರ, ಶಶಿಧರ ಮಂಗಾಜೆ, ಚರಣ್ ಶ್ರೀಕೃಷ್ಣನಗರ ಬಡಕಬೈಲು, ಜನಾರ್ದನ ಶೆಟ್ಟಿ ಕನ್ಯಾಬೆಟ್ಟು ಶ್ರೀ ಸೋಮಶೇಖರ ಪೊಳಲಿ, ಶ್ರೀ ನಾರಾಯಣ ಬಡಕಬೈಲು (ಫಿತರೀಶ್ ), ಶ್ರೀ ಕಿರಣ್ ಮಿಯಾಳ, ರಾಜೇಶ್ ಹೆಗ್ಡೆ ಮಂಗಾಜೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

