ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಶೀನ ಪೂಜಾರಿ ಹೊಸಮನೆ ನಾಟಿ ವೈದ್ಯರಾಗಿ ಗುರುತಿಸಿಕೊಂಡ ಹಾವುಕಡಿತಗೊಳಗಾದ ಸಾವಿರಾರು ಜೀವಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿಯೆ ಮದ್ದು ನೀಡಿ ಗುಣಪಡಿಸಿದ ಪೂಜಾರಿ ನಾಟಿ ವೈದ್ಯರು ವಿಷವೈದ್ಯರಾಗಿ ಗುರುತಿಸಿಕೊಂಡಿದ್ದಾರೆ.
ಇವರನ್ನು ಹಲಾವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿದ್ದಾರೆ. ಇವರಿಗೆ ಇದೀಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರೋದು ನಾಡಿನ ಜನತೆಗೆ ಸಂತಸದ ತಂದಿದೆ. ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಚೇತನಕ್ಕೆ ಊರಿನ ನಾಗರಿಕರು ಸಂತಸ ವೈಕ್ತಪಡಿಸಿದ್ದಾರೆ.
