ಮೈಸೂರು : ಕೇಂದ್ರದಿಂದ ಪರಿಹಾರ ತರಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಯಲ್ಲೇ ಆಗಲಿಲ್ಲ, ಇನ್ನು ಬಸವರಾಜ ಬೊಮ್ಮಾಯಿ ತರುತ್ತಾರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ, ನೆರೆ ಹಾವಳಿ ಕೂಡ ಹೆಚ್ಚಾಗಿದೆ. ಇದನ್ನೆಲ್ಲಾ ಬೊಮ್ಮಾಯಿ ನಿಭಾಯಿಸುವ ವಿಶ್ವಾಸ ನಮಗಿಲ್ಲ. ಆಯಾಯಾ ಜಿಲ್ಲೆಯ ಅಧಿಕಾರಿಗಳು ನೆರೆ ಹಾವಳಿಯನ್ನ ನಿಭಾಯಿಸುತ್ತಾರೆ. ಅವರನ್ನು ಸಿಎಂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
