ಬಂಟ್ವಾಳ: ಸಂತ ಫ್ರಾನ್ಸಿಸ್ ದೇವಾಲಯ ನೈನಾಡ್ ಮತ್ತು ಗೆಳೆಯರ ಬಳಗ ಕೊಳಕೇಬೈಲ್ ಸಹಯೋಗದಲ್ಲಿ ವಾಹನ ಅಪಘಾತದ ಬಳಿಕ ಅನಾರೋಗ್ಯದಿಂದ ಬಳಲುತ್ತಿರುವ ನೈನಾಡಿನ ಲೋಕೇಶ್ ಮತ್ತು ಸುಧಾಕರ್ ಎಂಬವರ ಮನೆಗೆ ಭೇಟಿ ನೀಡಿ 30,000 ಸಹಾಯ ಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂತ ಫ್ರಾನ್ಸಿಸ್ ಅಸಿಸ್ಸಿ ಚರ್ಚ್ನ ಧರ್ಮಗುರು ವಂದನಿಯ ಫಾ. ಜೇಸುದಾಸ್ ಡಿಕೋಸ್ತಾ, ಪಿಲಾತ್ತ ಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ನೆಲ್ವಿಸ್ಟರ್ ಪಿಂಟೋ ಹಾಗೂ ಗೆಳೆಯರ ಬಳಗದ ಅಧ್ಯಕ್ಷ ಅನಿಲ್ ಮೋರಸ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
