ಗುರುಪುರ : ಗುರುಪುರದ ಶ್ರೀ ವಜ್ರದೇಹಿ ಮಠದಲ್ಲಿ ಶ್ರೀ ಕ್ಷೇತ್ರ ನಿರ್ಮಾಣದ ಸಂಕಲ್ಪಕ್ಕಾಗಿ ನ. ೨೭ರಂದು `ಜಾತ್ರಾ ಮಹೋತ್ಸವ’ ನಡೆಯಿತು.
ಶುಕ್ರವಾರ ಬೆಳಿಗ್ಗೆ ದೇವರ ಸನ್ನಿಧಾನದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮಿ ಉಪಸ್ಥಿತಿ ಹಾಗೂ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಅಧ್ವರ್ಯುತನದಲ್ಲಿ ಭಕ್ತರ ಅಪೇಕ್ಷೆಯಂತೆ ಕ್ಷೇತ್ರ ನಿರ್ಮಾಣದ ನಿಮಿತ್ತ ನವಕ ಪ್ರದಾನ ಹೋಮ, ನವಕ ಕಲಶಾಭಿಷೇಕ, ಅನ್ನಸಂತರ್ಪಣೆ, ಸಂಜೆ ಮಹಾ ರಂಗಪೂಜೆ, ತುಳಸಿಪೂಜೆ, ಬಳಿಕ ಶ್ರೀ ದೇವರ ಬಲಿ ಹೊರಟು ಕಟ್ಟೆಪೂಜೆ, ವಸಂತ ಮಂಟಪ ಪೂಜೆ ನೆರವೇರಿತು. ತುಳಸಿಪೂಜೆಯಲ್ಲಿ ಶ್ರೀ ಕ್ಷೇತ್ರ ಕರಿಂಜೆಯ ಓಂ ಶ್ರೀ ಶಕ್ತಿ ಗುರು ಮಠದ ಶ್ರೀ ಮುಕ್ತಾನಂದ ಸ್ವಾಮಿ ಪಾಲ್ಗೊಂಡರು.


