ಗುರುಪುರ : ಕೊಣಾಜೆ ಕಿಲ್ಲೂರುಗುತ್ತು ಮೂಲದ ಪ್ರಸ್ತುತ ಮಂಗಳೂರು ನಿವಾಸಿ ಉದ್ಯಮಿ, ಯಕ್ಷಗಾನ ಪ್ರೇಮಿ ಕಿಲ್ಲೂರುಗುತ್ತು ಉದಯಾನಂದ ಶೆಟ್ಟಿ(೬೨) ಗುರುವಾರ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಕಟೀಲು ಶ್ರೀ ಕ್ಷೇತ್ರದ ೩೦ ಹಾಗೂ ಸುಂಕದಕಟ್ಟೆ ಶ್ರೀ ಕ್ಷೇತ್ರದ ಐದು ಯಕ್ಷಗಾನ ಬಯಲಾಟ ಆಡಿಸಿದ್ದರು.
