ಮುಂಬಯಿ:ಟೀಮ್ ಐಲೇಸಾ ಕ್ಕೆ ಹೆಗಲು ಕೊಟ್ಟನಂತಹ 20 ರಾಷ್ಟ್ರಗಳು ಒಟ್ಟಾಗಿ ಐ ಲೇಸಾ ತಂಡದ ಮೂಲಕ ಬಾರದೂರಿಗೆ ತೆರಳಿದ ಶ್ರೀ ಬಾಲು ಸರ್ ಅವರಿಗೆ ಸೆ.26ರಂದು ಶ್ರದ್ಧಾಂಜಲಿ ಅರ್ಪಿಸಿತು .
ಸಿನೀಮಾ ರಂಗದ ಖ್ಯಾತ ನಟ, ನಟಿಯರು , ಖ್ಯಾತ ಗಾಯಕ, ಗಾಯಕೀಯರು ಐ ಲೇಸಾ ತಂಡದವರು ಎಸ್ ಪಿ ಬಾಲ ಸುಬ್ರಮಣ್ಯಮ್ ಅವರಿಗೆ ನುಡಿನಮನವನ್ನು ಅರ್ಪಿಸಲು ವೇದಿಕೆ ಗೊತ್ತು ಮಾಡಿದ ಸಂದರ್ಭದಲ್ಲಿ ಗಾಯಕರು ಹಾಡಿನ ಮೂಲಕ ಶ್ರಂದ್ದಾಂಜಲಿ ಅರ್ಪಿಸಿದರೆ.ನಟ ನಟಿಯರು ಅವರ ಒಡನಾಟದ ಬಗ್ಗೆ ತಿಳಿಸಿ ಶ್ರದ್ದಾಂಜಲಿ ಅರ್ಪಿಸಿದರು.
ಖ್ಯಾತ ನಟಿ, ಗಾಯಕಿ, ಶ್ರೀಮತಿ ವಿನಯಪ್ರಕಾಶ್ ಅವರು ತಮ್ಮ ಮತ್ತು ಬಾಲು ಸರ್ ಜತೆಗಿನ ಒಡನಾಟದ ಬಗ್ಗೆ ತಿಳಿಸಿ ಅವರದೇ ಹಾಡುಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು ಚಲನ ಚಿತ್ರನಟ ಶ್ರೀ ಕೆ. ರವಿ ಭಟ್ ಅವರು ಅವರ ಬಾಲು ಸರ್ ಜತೆಗಿನ ಅನುಭವವನ್ನು ಹಂಚಿಕೊಂಡರು.ಐ ಲೇಸಾದ ರೂವಾರಿ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ರಮೇಶ್ಚಂದ್ರ ಅವರು ಬಾಲು ಸರ್ ಜೊತೆಗಿನ ಬಾಂಧವ್ಯವನ್ನು ಮನಕ್ಕೆ ಮುಟ್ಟುವಂತೆ ಬಿಚ್ಚಿಟ್ಟರು. ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಹಲವಾರು ಮಂದಿ ಅವರಿಗೆ ಜತೆಯಾದರು.
ಶ್ರೀ ಸುಧಾಕರ್ ಶೆಟ್ಟಿ ಬೆಂಗಳೂರು ಶ್ರೀ ಅನಂತ್ ರಾವ್ ಬೆಂಗಳೂರು ಶ್ರೀ ನವೀದ್ ಅಬುದಾಬಿ ಶ್ರೀರವಿರಾಜ್ ಅಬುದಾಬಿ ಮಿಸ್ ದೀಕ್ಷಾ ಶೆಟ್ಟಿಬೋಳ ದುಬೈ ಶ್ರೀ ಉಮೇಶ್ಅಸಗೋಳಿ ಯುಎಸ್ ಎ ಶ್ರೀ ಸುರೇಶ ಪೂಂಜಾ ಆಸ್ಟ್ರೇಲಿಯಾ ಶ್ರೀ ಭಾಸ್ಕರ್ ಶೇರಿಗಾರ್ ಯುಎಸ್ಎ ಶ್ರೀ ಸರ್ವೋತ್ತಮ ಶೆಟ್ಟಿ ಅಬುದಾಬಿ ಡಾ. ಶೀ ರವಿ ಶೆಟ್ಟಿ ಕತಾರ್
ಶ್ರೀ ಅವಿಲ್ ಡಿಸೋಜ ಯುಎಸ್ಎ ಶ್ರೀ ಆತ್ಮರಾಮ್ ಆಳ್ವ ಬೆಂಗಳೂರು ಮುಂತಾದವರು ತಮ್ಮ ಮನದಾಳದ ಮಾತಿನಿಂದ ಮತ್ತು ಅವರ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಯಕ್ರಮವನ್ನು ಮಣ್ಣ ಬಾಜನದ ಕವಿ ಶಾಂತಾರಾಮ ಶೆಟ್ಟಿ ಯವರು ನಿರೂಪಿಸಿದರು ಸೂರಿ ಮಾರ್ನಾಡ್ ಧನ್ಯವಾದದ ಮೂಲಕ ಶ್ರದ್ಧಾಂಜಲಿ ಸಭೆ ಮುಕ್ತಾಯಗೊಂಡಿತು .
ಈ ಪೂರ್ತಿ ಕಾರ್ಯಕ್ರಮವನ್ನು ಟೀಮ್ ಐಲೇಸಾ ದ ಎಲ್ಲಾ ಸದಸ್ಯರು ನಡೆಸಿಕೊಟ್ಟರು ಈ ಕಾರ್ಯಕ್ರಮದ ಪೂರ್ತಿ ವಿವರ ಈ ಕೆಳಗಿನ ಲಿಂಕ್ ನಲ್ಲಿದೆ.ಟೀಮ್ ಐಲೇಸಾ ಹಾಡಿದ ಬಾಲು ಸರ್ ಅವರ ಹಾಡುಗಳು ಜೊತೆಗಿವೆ ಅದಕ್ಕೂ ಒಮ್ಮೆ ಕಣ್ಣಾಗಿಸಿ ಕಿವಿಯಾಗಿಸಿ.ಬಾಲು ಸರ್ ಮತ್ತೊಮ್ಮೆ ಹುಟ್ಟಿ ಬನ್ನಿ ಕರ್ನಾಟಕದಲ್ಲೇ ಹುಟ್ಟಿಬನ್ನಿ
ಲಿಂಕ್ ಕ್ಲಿಕ್ ಮಾಡಿ.
https://www.facebook.com/ilesathevoiceofocean/videos/1260866610978770/
ಟೀಮ್ ಐ ಲೇಸಾ
ಸರ್ವ ಸದಸ್ಯರು*
