ಕೈಕಂಬ: ಮಂಗಳೂರು ತಾಲೂಕಿನ ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ ಟಿ.ಸೈಯದ್ ತೋಕೂರು (69) ಅಡ್ಡೂರಿನ ಸ್ವಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಮೃತರು ಅಡ್ಡೂರಿನ ಶರೀಅತ್ ಮಹಿಳಾ ಕಾಲೇಜು ಹಾಗೂ ಅಡ್ಡೂರು ಅಲ್ಬಿರ್ರ್ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಏಳು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.
ಕರ್ನಾಟಕ ಜಂಇಯ್ಯತುಲ್ ಉಲಾಮ ಅದ್ಯಕ್ಷ NPM ಝೈನುಲ್ ಆಬಿದೀನ್ ತಂಙಲ್ ದುಗಲಡ್ಕ ,ವಕಪು ದ ಕ ಜಿಲ್ಲಾ ಉಪಾದ್ಯಕ್ಷ ಶಾಹುಲ್ ಹಮೀದ್ ಮೆಟ್ರೊ ಗುರುಪುರ ರೇಂಜ್ ಮದರಸ ಮ್ಯನಜಿಮೆಂಟ್ ಅಸೊಶಿಯೆಶನ್ ಅದ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿ ,ಜಂಇಯ್ಯತುಲ್ ಮುಅಲ್ಲಿಮೀನ್ ಗುಪುರ ರೆಂಜ್ ಅದ್ಯಕ್ಷ ಜಮಾಲುದ್ದೀನ್ ದಾರಿಮಿ ,SKSSF ದ ಕ ಜಿಲ್ಲಾ ಅದ್ಯಕ್ಷ ಸೈಯ್ಯದ್ ಅಮೀರ್ ತಂಙಲ್ ಕಿನ್ಯ SKSSF ಕೈಕಂಬ ವಲಯ,SKSSF ಅಡ್ಡೂರು ಕ್ಲಸ್ಟರ್ ತಿವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
