ಕೈಕಂಬ : ಲಕ್ಷಾಂತರ ಮೊತ್ತದ ಕಾಮಗಾರಿ ನಡೆಸಿ ಕೊಡುವುದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರಿಗೆ ಹಕ್ಕುಪತ್ರ ನೀಡಿದಾಗ ಅತೀವ ಖುಷಿಯಾಗುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.gur-june-23-hakkupatra-2

ನೀರುಮಾರ್ಗದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ 25 ಕುಟುಂಬಕ್ಕೆ ಹಕ್ಕುಪತ್ರ ನೀಡಿ ಮಾತನಾಡಿದರು. ಕೇವಲ ಎರಡು ವರ್ಷದ ಅವಧಿಯಲ್ಲಿ ಸುಮಾರು 4500 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರ ನೀಡಿದಾಗ ಅವರ ಬಹುದಿನಗಳ ಕನಸು ನನಸಾಗುತ್ತದೆ ಎಂದರು.gur-june-23-hakkupatra-1

ಕಾರ್ಯಕ್ರಮದಲ್ಲಿ ನೀರುಮಾರ್ಗ ಪಂಚಾಯತ್ ಅಧ್ಯಕ್ಷೆ ಕುಸ್ತೂರಿ, ಉಪಾಧ್ಯಕ್ಷ ಕಿಶೋರ್ ಕುಮಾರ್, ಉಪತಹಶೀಲ್ದಾರ್ ಶಿವಪ್ರಸಾದ್ ನೀರುಮಾರ್ಗ, ಪಿಡಿಒ ಸುಧೀರ್, ಗ್ರಾಮ ಲೆಕ್ಕಾಧಿಕಾರಿ ಅಮ್ಜದ್ ಖಾನ್, ಬಿಜೆಪಿ ಮುಖಂಡರಾದ ಸಚಿನ್ ಹೆಗ್ಡೆ, ಚೇತನ ನಟ್ಟಿಲ್, ಪಂಚಾಯತ್ ಸದಸ್ಯರಾದ ಪವಿತ್ರಾ, ಸಂತೋಷ್ ಲೂಯಿಸ್ ಹಾಗೂ ಕಾರ್ಯಕರ್ತರು ಇದ್ದರು. ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಮುಖರು ಶಾಸಕರಿಗೆ ಶಾಲು ಹೊದಿಸಿ ಗೌರವಿಸಿದರು.

By suddi9

Leave a Reply

Your email address will not be published. Required fields are marked *