ಕೈಕಂಬ: ಬಸ್ ನೌಕರರ ಸಂಘ (ರಿ) ಪೊಳಲಿ ಇವರ ವತಿಯಿಂದ ಇತ್ತಿಚಿಗೆ ನಿಧನರಾದ ಮಾಧವ ಮಳಲಿ ಅವರ ಧರ್ಮಪತ್ನಿಗೆ ಪೊಳಲಿ ಬಸ್ ನೌಕರರ ಸಂಘದ ಸದಸ್ಯರೂ ಧಾನಿಗಳಿಂಧ ಸಂಗ್ರಹಿಸಿದ ಮೊತ್ತ 10000 ರೂಪಾಯಿಯನ್ನು ಮತ್ತು ದಿನಪಯೋಗಿ ವಸ್ತುಗಳನ್ನು ಸಂಘದ ಪದಾದಿಕಾರಿಗಳು ವಿತರಿಸಿದರು.
ಮಾಧವ ಅವರು ಹಲಾವಾರು ವರ್ಷಗಳಿಂದ ಖಾಸಗಿ ಬಸ್ಸಿನಲ್ಲಿ ನಿರ್ವಾಹಕರಾಗಿ ದುಡಿಯುತ್ತಿದ್ದ ಅವರು ಇತ್ತೀಚೆಗೆ ಹೃದಯಘಾತದಿಂದ ನಿಧನಹೊಂದಿದ್ದರು. ಪೊಳಲಿ ಬಸ್ ನೌಕರರ ಸಂಘದ ಸದಸ್ಯರಾದ ಹರೀಶ್ ಶೆಟ್ಟಿ ಪೊಳಲಿ , ಜಯಂತ ಪೊಳಲಿ, ಅಶೋಕ್ ಅಮ್ಮುಂಜೆ, ಮುಖೇಶ್ ಬೆಳ್ಳೂರು ಇದ್ದರು.
