ಕಾರ್ಕಳ : ಕಡ್ತಲ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಸಮ್ಮುಖದಲ್ಲಿ ದಾನಿಗಳಿಂದ ಸಂಗ್ರಹಿಸಿದ 600 ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ ಮಾತನಾಡಿ ಕಿಟ್ ವಿತರಣೆಗೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ,ಅಜೆಕಾರು ಹೋಬಳಿಯ ಉಪ ತಹಸೀಲ್ದಾರ್ ಮಂಜುನಾಥ್ ನಾಯಕ್, ಉದ್ಯಮಿಗಳಾದ ಯೋಗೀಶ್ ಮಲ್ಯ,ವಿಶ್ವನಾಥ್ ಪೂಜಾರಿ, ದಿನೇಶ್ ಕಿಣಿ,ಪ್ರಸನ್ನಶೆಟ್ಟಿ,ಗಜಾನಂದ್,ಅಜಿತ್ ದೇವಾಡಿಗ ಹಾಗೂ ಜಿ.ಪಂ ಸದಸ್ಯರು,ತಾ.ಪಂ ಸದಸ್ಯರು,ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು
