ಕುಪ್ಪೆಪದವು: ಕೇಸರಿ ಫ್ರೆಂಡ್ಸ್ ಚಂದ್ರಮಜಲು, ಮುತ್ತೂರು ಇದರ ವತಿಯಿಂದ ಇಲ್ಲಿನ ಶಾಂತಿಪಲ್ಕೆ ಎಂಬಲ್ಲಿಯ ನಿವಾಸಿ ಪ್ರೇಮ ಎಂಬವರ ಮನೆಗೆ ಸುಮಾರು 20 ಸಾವಿರ ವೆಚ್ಚದಲ್ಲಿ ವಿದ್ಯುದೀಕರಣದ ಕೊಡುಗೆ ನೀಡಿದ್ದು, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು ಆದಿತ್ಯವಾರ ಪ್ರಥಮವಾಗಿ ವಿದ್ಯುತ್ ದೀಪ ಬೆಳಗಿಸಿದರು.
2 ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿರುವ ವಿಧವೆ ಪ್ರೇಮ ಅವರಿಗೆ ಬಡತನದಿಂದಾಗಿ ವಿದ್ಯುದೀಕರಣ ಕೆಲಸ ಮಾಡಿಸಲು ಸಾಧ್ಯವಾಗಿರಲಿಲ್ಲ. ಮುತ್ತೂರು ಪಂಚಾಯತ್ ಸದಸ್ಯ ತಾರಾನಾಥ್ ಕುಲಾಲ್, ಮತ್ತು ರಾಜೇಶ್ ದಾಸ್, ಮನೋಜ್ ಕಾಡೊಟ್ಟು, ಕೇಸರಿ ಫ್ರೆಂಡ್ಸ್ ಅಧ್ಯಕ್ಷ ರಾಜೇಶ್ ಚಂದ್ರಮಜಲು, ಫ್ರೆಂಡ್ಸ್ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
