ಕುಪ್ಪೆಪದವು: ಭಜರಂಗದಳ ಸೇವಾಬ್ರಿಗೇಡ್ ಎಡಪದವು ಇದರ 22 ನೇ ಸೇವಾ ಯೋಜನೆಯಲ್ಲಿ , ರಸ್ತೆ ಅಪಘಾತದಲ್ಲಿ ಎಡಗಾಲಿಗೆ ಗಂಭೀರವಾಗಿ ಗಾಯಗೊಂಡು ಕೆಲಸ ಮಾಡಲಾಗದೆ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಬಜಪೆ ಸ್ವಾಮಿಲಪದವು ನಿವಾಸಿ ಜನಾರ್ಧನ ಗೌಡರ ಮಗ ತಿಲಕ್ ರಾಜ್ ಅವರಿಗೆ, ಸದಸ್ಯರು ಮತ್ತು ದಾನಿಗಳಿಂದ ಸಂಗ್ರಹಿಸಿದ 50, 000 ರೂಪಾಯಿಯನ್ನು, ಬ್ರಿಗೇಡ್ ನ ಪದಾಧಿಕಾರಿಗಳು, ಸದಸ್ಯರು ತಿಲಕ್ ರಾಜ್ ಅವರ ಮನೆಯಲ್ಲಿ ಹಸ್ತಾಂತರಿಸಲಾಯಿತು.

