ಕುಪ್ಪೆಪದವು: ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ, ಎಡಪದವು ಗ್ರಾಮಪಂಚಾಯತ್ ಮತ್ತು ಭಜರಂಗದಳ ಸೇವಾಬ್ರಿಗೇಡ್ ಜಂಟೀ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ, ಎಡಪದವಿನ ವಿವೇಕಾನಂದ ಕಾಲೇಜಿನ ಮುಂಭಾಗದಲ್ಲಿರುವ ಶಿಥಿಲಗೊಂಡಿರುವ ಪ್ರಯಾಣಿಕರ ತಂಗುದಾಣದ ಪುನರ್ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲತಿ, ಉಪಾಧ್ಯಕ್ಷ ಗಂಗಾಧರ್, ಕಾಲೇಜು ಶಿಕ್ಷಕರಾದ ಶ್ರೀ ವಾಸು, ಉದ್ಯಮಿಗಳಾದ ಗಣೇಶ್ ನಾಯಕ್, ಧನಂಜಯ ಮೇಸ್ತ್ರಿ, ಬ್ರಿಗೇಡ್ ನ ಸಂಚಾಲಕರು, ಸಹಸಂಚಾಲಕರು, ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

