ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದ್ದು ಇಂದು 9ನೇ ದಿನದ ಪೂಜೆಯನ್ನು ಆಚರಿಸಲಾಯ್ತು. ರಾಮಕೃಷ್ಣತಪೋವನದ ಚೈತನ್ಯಾನಂದ ಸ್ವಾಮೀಜಿಗಳು ಇಂದು ಮಾ ದುರ್ಗಾ ದೇವಿಗೆ ಪೂಜೆ ಸಲ್ಲಿಸಿದರು.
ಹೇಮಾವತಿ ಅವರ ಆರು ವರ್ಷದ ಪುತ್ರಿ ಭವನಳಲ್ಲಿ ದುರ್ಗೆಯನ್ನು ಕಂಡ ಸ್ವಾಮೀಜಿಗಳು ಆಕೆಯನ್ನು ಮಾ ದುರ್ಗಾ ದೇವಿಯ ತರ ಶೃಂಗರಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿ ಕಾಲು ಹಿಡಿದರು.















