ಬಂಟ್ವಾಳ : ವಟಪುರ ಕ್ಷೇತ್ರವೆಂದೇ ಪ್ರಸಿದ್ಧ ಪಡೆದಿರುವ ಬಂಟ್ವಾಳ ಪೇಟೆಯ ಮಧ್ಯದಲ್ಲಿ ಇರುವ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಇಂದು ಆದಿತ್ಯವಾರ ಮುಂಜಾನೆ ಸಮಯದಲ್ಲಿ ವಿಶ್ವರೂಪ ದರ್ಶನ ನಡೆಯಿತು.

ದೇವಳದ ಸುತ್ತ ಬೆಳಗಿಸಿದ ಹಣತೆ ಭಕ್ತರ ಮನ ಸೆಳೆಯಿತು. ತಿರುಮಲ ವೆಂಕಟರಮಣ ಸ್ವಾಮಿಯ ದರ್ಶನ ಪಡೆದ ಭಕ್ತರು ಶ್ರೀ ದೇವರ ಆಶೀರ್ವಾದ ಪಡೆದರು. ಈ ದೇವರ ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರರು.
ದೇವಳದ ಸಿಬ್ಬಂದಿಗಳು ಭಾಗವಹಿಸಿದ್ದರು.








