ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ವಾಮಂಜೂರಿನ ನೂತನ ಕಟ್ಟಡ `ಸಾಧನಾ ಸಹಕಾರಿ ಸಂಕೀರ್ಣ’ಕ್ಕೆ ಸಹಕಾರಿ ಇಲಾಖೆಯ ಮೈಸೂರು ಪ್ರಾಂತ್ಯದ ಜಂಟಿ ನಿಬಂಧಕ ಪ್ರಕಾಶ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕಾಶ್ ಅವರನ್ನು ವಿನಯ ಕುಮಾರ್ ಶೆಟ್ಟಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪಿ. ಶೇಖಬ್ಬ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ರಾವ್, ನಿರ್ದೇಶಕಿ ರೀತಾ ಸುವರ್ಣ, ಇಂಜಿನಿಯರ್ ಜೀವನ್ರಾಜ್, ಸಿಬ್ಬಂದಿ ವರ್ಗ ಇದ್ದರು.
