ಬಂಟ್ವಾಳ: ಲಕ್ಷಾಂತರ ರೂ‌ ಮೌಲ್ಯದ ಮರ ಮತ್ತು ಲಾರಿಯನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಗರಂಗಡಿ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಗರಂಗಡಿ ಎಂಬಲ್ಲಿ ಸಾರ್ವಜನಿಕ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಅರಣ್ಯ ಇಲಾಖೆ ಯ ಅಧಿಕಾರಿಗಳು 12 ಲಕ್ಷ ಮೌಲ್ಯದ ಲಾರಿ ಸಹಿತ ಸಾಗುವಣಿ ಮರಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

DSC_6488
ಈ ಸಂದರ್ಭದಲ್ಲಿ ಆರೋಪಿ ಲಾರಿ ಚಾಲಕ ಪೈಜಲ್ ಎಂಬಾತನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಲಾಗಿದೆ.
ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ಅವರ ಮಾರ್ಗದರ್ಶನ ದಲ್ಲಿ ಉಪವಲಯ ಅರಣ್ಯಾಧಿಕಾರಿ ಅನಿಲ್ ಕೆ, ಮನೋಜ್, ಲಕ್ಮೀನಾರಾಯಣ ಸ್ಮೀತಾ, ಚಾಲಕ ಜಯರಾಮ್ ಕಾರ್ಯಚರಣೆ ನಡೆಸಿದ್ದರು.

By suddi9

Leave a Reply

Your email address will not be published. Required fields are marked *