ಬಂಟ್ವಾಳ: ಇಲ್ಲಿನ ರಾಜಾಜಿನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ ಬಸವನಗುಡಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಭಟ್ ನಿಶಾಂತ್ ಗಣೇಶ್ ಇವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಆಯ್ಕೆಯಾದ ನಿಶಾಂತ್, ನೆತ್ರೆಕೆರೆ ಅನಿತಾ ಮತ್ತು ಗಣೇಶ್ ಭಟ್ ದಂಪತಿ ಪುತ್ರ. ಕರಾಟೆ ಶಿಕ್ಷಕ ಮಾಧವ ಅಳಿಕೆ ಇವರ ಶಿಷ್ಯನಾಗಿದ್ದಾರೆ.
