ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಘಟಕದ ವತಿಯಿಂದ ಅಖಂಡ ಭಾರತದ ಸಂಕಲ್ಪ ದ ಅಂಗವಾಗಿ ಕಾಲ್ನಡಿಗೆ ಜಾಥ ಕೈಕಂಬ ಪೊಳಲಿ ದ್ವಾರದಿಂದ ಆರಂಭವಾಯಿತು. 

ಈ ಕಾಲ್ನಡಿಗೆ ಜಾಥವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಿನಿವಿಧಾನ ಸೌಧದ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ, ಬಿಜೆಪಿ ವಕ್ತಾರ ಹರಿಕ್ರಷ್ಣ ಬಂಟ್ವಾಳ, ಪ್ರಮುಖರಾದ ಬಂಟ್ವಾಳ, ಆಶೋಕ್ ಶೆಟ್ಟಿ ಸರಪಾಡಿ, ಗುರುರಾಜ್ ಬಂಟ್ವಾಳ ಸುರೇಶ್ ಬೆಂಜನಪದವು , ಅಖೇಶ್ ಬೆಂಜನಪದವು ಅಮಿತ್ ಕಲ್ಲಡ್ಕ, ದಕ್ಷನ್ ಸಜೀಪ,ಲೋಹಿತ್ ಸಜೀಪ , ಪೊಳಲಿ ಪ್ರೇಮ್ ಮತ್ತಿತರರು ಉಪಸ್ಥಿತರಿದ್ದರು.

