ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ಉಪನಿರೀಕ್ಷಕ ರಾಗಿ ಸೇವೆ ಸಲ್ಲಿಸಿದ ಯಲ್ಲಪ್ಪ ಅವರು ವಿಟ್ಲ ಪೋಲೀಸ್ ಸ್ಟೇಷನ್ ಗೆ ವರ್ಗಾವಣೆ ಗೊಂಡ ಇವರಿಗೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಮಂಗಳೂರು ಡಿ.ಅಇ.ಅರ್.ಬಿ.ಯಿಂದ ಮೆಲ್ಕಾರ್ ಟ್ರಾಫಿಕ್ ಠಾಣೆಗೆ ಎಸ್ ಐ ಆಗಿ ನಿಯೋಜನೆಗೊಂಡ ಮಂಜುಳಾ ಅವರನ್ನು ಸ್ವಾಗತಿಸಲಾಯಿತು.
ಕಾರ್ಯ ಕ್ರಮದ ಅದ್ಯಕ್ಷ ತೆಯನ್ನು ವಹಿಸಿದ್ದ ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರು ಮಾತನಾಡಿ, ಸಾರ್ವಜನಿಕ ರ ಸೇವೆ ಮಾಡಲು ಪೋಲೀಸ್ ಇಲಾಖೆ ನಮಗೆ ಸಿಕ್ಕಿ ರುವ ದೊಡ್ಡ ಅವಕಾಶ . ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಪ್ರಾಮಾಣಿಕ ರಾಗಿ ಕೆಲಸ ಮಾಡಿದಾಗ ಪೋಲೀಸರ ಮೇಲಿರುವ ಉತ್ತಮಭಾವನೆಗಳು ಮತ್ತಷ್ಟು ಗಟ್ಟಿ ಯಾಗುತ್ತದೆ . ಅಸಹಾಯಕ ರಿಗೆ ಸಹಾಯ ಮಾಡುವ ಪೋಲೀಸರು ನಾವು ಅಗಬೇಕು ಎಂದರು. ಶಾಲಾ ವಿದ್ಯಾರ್ಥಿಗಳಿಗೆ ಪೋಲೀಸ್ ಬಗ್ಗೆ ನಿಯಮಗಳ ಬಗ್ಗೆ ಮಾಹಿತಿ ನೀಡಿದಾಗ ಬದಲಾವಣೆ ಸಾಧ್ಯ ಈ ಎಲ್ಲವನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.
ಈ ಕಾರ್ಯಕ್ರಮ ದಲ್ಲಿ ನಗರ ಠಾಣಾ ಎಸ್ .ಐ.ಚಂದ್ರಶೇಖರ್, ಅಪರಾಧ ವಿಭಾಗ ದ ಎಸ್.ಐ.ಹರೀಶ್, ಎ.ಎಸ್.ಐ.ಬಾಲಕ್ರಷ್ಣ, ಸಿಬ್ಬಂದಿ ಗಳಾದ ಕ್ರಷ್ಣ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

