ಬಂಟ್ವಾಳ: ವಾಮದಪದವು ಕೊಡಂಬೆಟ್ಟು ಗ್ರಾಮದ ರಾಮೋಟ್ಟು ಎಂಬಲ್ಲಿ ಪರಿಶಿಷ್ಟ ಜಾತಿಯ ಯುವಕರ ಮೇಲೆ ಹಲ್ಲೆಯಾಗಿತ್ತು. ಹಲ್ಲೆಗೊಳಗಾದ ಗಾಯಾಳುಗಳನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು.

ಈ ಸಂದರ್ಭದಲ್ಲಿ ದಿನೇಶ್ ಅಮ್ಟೂರು, ಸಂತೋಷ್ ಕುಮಾರ್ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮೇಶ್ ಕುದ್ರೆಬೆಟ್ಟು, ಗಂಗಾದರ ಕೋಟ್ಯಾನ್, ರುಕ್ಮಯ ಬಂಗೇರ, ಶೇಖರ ಕಡ್ತಲಬೆಟ್ಟು ಉಪಸ್ಥಿತರಿದ್ದರು.

