ಚಿತ್ರದುರ್ಗ: ಉಡುಪಿಯ ಕೆ.ಎಂ.ಉಡುಪ ಹಾಗೂ ಪುಣೆಯ ಡಾ.ವೀಣಾ ಜೋಷಿ ಅವರಿಗೆ 6ನೇ ಸೆಲ್ಕೊ ಸೂರ್ಯಮಿತ್ರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಕೇಂದ್ರೀಕೃತ ಸೌರ ಉಪಕರಣಗಳಿಗೆ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಒದಗಿಸುವ ನೀತಿಗೆ ಪ್ರವರ್ತಕರಾಗಿರುವ ಉಡುಪ ಅವರನ್ನು ಹಾಗೂ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ನೀಡುವ ಕೊಡುಗೆಗಾಗಿ ವೀಣಾ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇಲ್ಲಿನ ತರಾಸು ರಂಗಮಂದಿರದಲ್ಲಿ ಶನಿವಾರ ಸೆಲ್ಕೊ ಫೌಂಡೇಶನ್ ನಿಂದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

