ಸಿನೆಮಾ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಪ ಲಿಟ್ಸ್ ಚಾಂಪ್ಸ್ ಸ್ಪರ್ಧೆಯ ಎಪಿಸೋಡ್ ಒಂದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಸ್ತುತ 14 ನೇ ಸೀಸನ್ ಪ್ರಾರಂಭವಾಗಿದ್ದು, ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ಜರುಗಿದೆ. ಮುಂದಿನ ಶನಿವಾರ ಹಾಗೂ ಭಾನುವಾರ ವಿರೇಂದರ ಹೆಗ್ಗಡೆ ಅವರು ಭಾಗವಹಿಸಿರುವ ಎಪಿಸೋಡ್ ಪ್ರಸಾರವಾಗಲಿದೆ.
ಇನ್ನು ಕಳೆದ ವಾರದ ಎಪಿಸೋಡ್ ನಲ್ಲಿ ಈ ಹಿಂದಿನ ಸೀಸನ್ ಸ್ಪರ್ಧಿಗಳಾಗಿದ್ದ ಚೆನ್ನಪ್ಪ, ಮಹಬೂಬ್ ಖಾನ್, ಸಂಚಿತಾ ಹೆಗ್ಡೆ, ಸುಹಾನಾ ಹಾಗೂ ಇನ್ನಿತರರು ಆಗಮಿಸಿದ್ದರು. ಇವರೆಲ್ಲರೂ ಪ್ರಸ್ತುತ ಸ್ಪರ್ಧಿಗಳಾದ ಲಕ್ಷ್ಮೀ, ಜ್ಞಾನೇಶ್, ರುಚಿತಾ, ತೇಜಸ್ ಹಾಡಿದ್ದರು.

