ಶ್ರೀಶ ಎಳ್ಳಾರೆ ನಿರ್ದೇಶನದ ಪ್ರಾರಬ್ಧ ಕಿರುಚಿತ್ರ ಬಿಡುಗಡೆ
ಕಾರ್ಕಳ:ಶ್ರೀಶ ಎಳ್ಳಾರೆ ನಿರ್ದೇಶನದ ಪ್ರಾರಬ್ಧ ಕಿರುಚಿತ್ರವನ್ನು ನವರಸನಾಯಕ ಭೋಜರಾಜ್ ವಾಮಂಜೂರ್ ಅವರು ಕದ್ರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಚಿತ್ರದ ಸಹ ನಿರ್ದೇಶಕ ಶ್ರುತಿನ್ ಶೆಟ್ಟಿ,ಅಭಿಲಾಷ್ ಪೂಜಾರಿ,ಸಂದೀಪ್ ಬಾರಡಿ,ನಟ ಆರ್.ಜೆ ತ್ರಿಶೂಲ್, ಸೌಮ್ಯ ಮೆಂಡನ್ ಉಪಸ್ಥಿತರಿದ್ದರು.
ಈ ಕಿರುಚಿತ್ರವು ಕನಸು ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.ಚಿತ್ರದ ಛಾಯಾಗ್ರಾಹಣವನ್ನು ಪ್ರಜ್ವಲ್ ಸುವರ್ಣ ಮಾಡಿದ್ದಾರೆ. ಹಾಗೂ ಪೋಸ್ಟರ್ ಅನ್ನುಸುಹೈಲ್ ವಿನ್ಯಾಸಗೊಳಿಸಿದ್ದಾರೆ. ಶ್ರೀಶ ಎಳ್ಳಾರೆ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಸೃಷ್ಟಿ ಆರ್ ಶೆಟ್ಟಿ ನಟಿಸಿದ್ದಾರೆ.