ಕೈಕಂಬ:ಇತಿಹಾಸ ಪ್ರಸಿದ್ಧ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ. 18ರಿಂದ ಫೆ. 25ರವರೆಗೆ ನಡೆಯಲಿದ್ದು. ಇದರ ಅಂಗವಾಗಿ ನಾನಾ ಕೇಂದ್ರಗಳಿಂದ ಫೆ.18 ರಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಇಲ್ಲಿನ ಎಡಪದವು, ಮುಚ್ಚೂರು, ಕುಪ್ಪೆಪದವು, ಮಿಜಾರ್ ಪರಿಸರದ ಗ್ರಾಮಗಳ ಹೊರೆಕಾಣಿಕೆ ಸಲ್ಲಿಸುವುವವರಿಗೆ ಅನುಕೂಲವಾಗುವಂತೆ ಶ್ರೀ ರಾಮ ಮಂದಿರದಲ್ಲಿ ಉದ್ಘಾಟನೆ ಮತ್ತು ಕಾರ್ಯಾಲಯ ಉದ್ಘಾಟನೆಗೊಂಡಿತು. ಕಡುಪು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಕೆ.ಕೃಷ್ಣರಾಜ ತಂತ್ರಿ, ರತೀಸ್ ಭಟ್ ಪಲ್ಕೆ,ಮಂದಿರದ ಅಧ್ಯಕ್ಷ ಮುರಳೀಧರ ಶೆಟ್ಟಿ , ಗ್ರಾ. ಪಂ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಂಗಾಧರ್ ಮತ್ತಿತರರು ಇದ್ದರು.
