ಮ0ಗಳೂರು: ನವೆಂಬರ್ 30 ರಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರು ಆರ್ಟಿಓ ಕಚೇರಿ ಸಭಾಂಗಣದಲ್ಲಿ ಸಾರಿಗೆ ಅದಾಲತ್ ನಡೆಯಲಿದೆ. ಸಾರಿಗೆ ಕಛೇರಿಗೆ ಸಂಬಂಧಿಸಿದ ಕುಂದು ಕೊರತೆ ಬಗ್ಗೆ ಲಿಖಿತವಾಗಿ ನವೆಂಬರ್ 28 ಕ್ಕಿಂತ ಮುಂಚಿತವಾಗಿ ಉಪ ಸಾರಿಗೆ ಆಯುಕ್ತರು, ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಕಳುಹಿಸಿಕೊಡುವಂತೆ ಹಾಗೂ ಸಾರಿಗೆ ಅದಾಲತ್ನಂದು ದೂರುದಾರರು ಖುದ್ದಾಗಿ ಹಾಜರಿರಬೇಕೆಂದು ಪ್ರಕಟಣೆ ತಿಳಿಸಿದೆ.
