ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ದ ಕ ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಸನ್ ಇದರ ಸಹಕಾರದೊಂದಿಗೆ ವಿಟ್ಲದ ಮಾದರಿ ಶಾಲಾ ಮೈದಾನದ ಸ್ವರ್ಗೀಯ ನ ಕೃಷ್ಣಪ್ಪ ಕ್ರೀಡಾಂಗಣದಲ್ಲಿ ನಡೆದ ಅಂತರ್ ಜಿಲ್ಲಾ ಅಹರ್ನಿಶಿ ಕಬಡ್ಡಿ ಪಂದ್ಯಾಟ ಪಂಡಿತ್ ದೀನದಯಾಳ್ ಉಪಾಧ್ಯಾಯ ಟ್ರೋಫಿ 2017 ಇದರ ಉದ್ಘಾಟನೆಯನ್ನು ಹೈಕೋರ್ಟ್ ನ್ಯಾಯವಾದಿ ವಿನೋದ್ ಕುಮಾರ್ ಮಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಸಾಯಿಗಣೇಶ್ ಇಂಡೇನ್ ಗ್ಯಾಸ್ ಮಾಲಕ ಸತೀಶ ಕುಮಾರ್ ಇರಾಬಾಳಿಕೆ ಇವರು ವಹಿಸಿದ್ದರು. ವಿಟ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘ ಚಾಲಕ ವೆಂಕಟೇಶ್ವರ ಅಮೈ ಕ್ರೀಡಾಂಗಣ ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ, ಮಂಗಳೂರು ಭವಾನಿ ಸ್ಯಾನಿಟರಿ ಮಾಲಕ ಯೋಗೀಶ್, ಉದ್ಯಮಿ ಸುಬಾಸ್ಚಂದ್ರ ನಾಯಕ್, ಸ್ವಸ್ತಿಕ್ ಫ್ರಂಡ್ಸ್ ಗೌರವಾಧ್ಯಕ್ಷ ನಾಗೇಶ ಬಸವನಗುಡಿ, ಅಧ್ಯಕ್ಷ ಸುದರ್ಶನ್ ಉಪಸ್ಥಿತರಿದ್ದರು.


