ಬಂಟ್ವಾಳ:ತಾಲ್ಲೂಕಿನಲ್ಲಿ ಲಭ್ಯವಿರುವ ಆಕ್ಷೇಪ ರಹಿತ ಡಿ.ಸಿ. ಮನ್ನಾ ಸರ್ಕಾರಿ ಜಮೀನನ್ನು ಭೂರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಅರ್ಹ ಫಲಾನನುಭವಿಗಳು ನಿಗದಿತ ಅರ್ಜಿ ನಮೂನೆ ಮೂಲಕ ಆಯಾಯ ಗ್ರಾಮ ಲೆಕ್ಕಿಗರು ಅಥವಾ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವಂತೆ ಬಂಟ್ವಾಳ ತಹಶೀಲ್ದಾರ್ರ ಪ್ರಕಟಣೆ ತಿಳಿಸಿದೆ.
