ಜ್ಯೋತಿಗುಡ್ಡೆ: ಮಕ್ಕಳು ಪ್ರತಿಭೆಗಳ ಸಾಗರ, ಪೋಷಣೆಯಿಲ್ಲದೆಗಿಡ ಬೆಳೆಯುವುದಿಲ್ಲ ಹೇಗೋ ಪ್ರೋತ್ಸಾಹವಿಲ್ಲದೆ ಮಕ್ಕಳ ಶೈಕ್ಷಣಿಕಅಭಿವೃದ್ಧಿಕಷ್ಟಸಾಧ್ಯ.ಮಕ್ಕಳೆಂದರೆ ದೇವರುಅವರನ್ನುದೇವರಕಾರ್ಯಕ್ರಮದಲ್ಲಿ ಸನ್ಮಾನಿಸುವುದು ಸಂದರ್ಭೋಚಿತಚಿಂತನೆ. ಇದುಕೂಡದೇಶ ಸೇವೆ ಎಂದುಬಂಟ್ವಾಳ ತಾಲೂಕುಗಾಣಿಗರ ಸೇವಾ ಸಂಘದಅಧ್ಯಕ್ಷರಾದರಘು ಸಪಲ್ಯಇವರುಅಭಿಪ್ರಾಯಪಟ್ಟರು.ಅವರುಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀದೇವಸ್ಥಾನದ ನವರಾತ್ರಿಉತ್ಸವದ ಪ್ರಯುಕ್ತ ನಡೆದಧಾರ್ಮಿಕ ಸಭಾಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದರು.DSC_0073

ಬಂಟ್ವಾಳ ತಾಲೂಕುಗಾಣಿಗರ ಸೇವಾ ಸಂಘದಅಧ್ಯಕ್ಷರಾದ ರಘು ಸಪಲ್ಯ, ಶ್ರೀ ಲಕ್ಷ್ಮೀ ವಿಷ್ಣು ಮೂರ್ತಿದೇವಸ್ಥಾನದೇವಂದ ಬೆಟ್ಟುವಿನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿವಾಕರ್ ಪಂಬದ ಬೆಟ್ಟು, ಹಿಂದುಕಲ್ಯಾಣ ಸೇವಾ ಟ್ರಸ್ಟ್ (ರಿ) ಇದರ ವಿಶ್ವಸ್ಥರಾದರಾಮದಾಸ್ ಬಂಟ್ವಾಳ, ಶ್ರೀ ದುರ್ಗಾಎಂಜಿನೀಯರಿಂಗ್ ವಕ್ರ್ಸ್‍ನ ಗಂಗಾಧರ್‍ ಕುಲಾಲ್ ಬಂಟ್ವಾಳ, ತುಂಬೆಗ್ರಾಮ ಪಂಚಾಯತ್‍ನಅಭಿವೃದ್ಧಿ ಅಧಿಕಾರಿಗಳಾದ ಚಂದ್ರಾವತಿ   ಜಪ್ಪಿನಮೊಗರು ಉಪಸ್ಥಿತರಿದ್ದರು.DSC_0240

ಇದೇ ವೇದಿಕೆಯಲ್ಲಿ ಸ್ಥಳೀಯ ಸರಕಾರಿ ಶಾಲೆಗಳಲ್ಲಿ 2016-17ನೇ ಸಾಲಿನಲ್ಲಿಶೈಕ್ಷಣಿಕವಾಗಿಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳ ಪುರಸ್ಕಾರ ನಡೆಯಿತು. ಯು ಧೀರಜ್ (ಪ್ರಾಥಮಿಕಬ್ರಹ್ಮರಕೂಟ್ಲು), ಕು ಮನ್ವಿತ(ಪ್ರಾಥಮಿಕತುಂಬೆ), ಕು ಪ್ರಜ್ಞಶ್ರೀ(ಪ್ರಾಥಮಿಕನೆತ್ರಕೆರೆ), ಕು.ಚೈತನ್ಯಾ(ಪ್ರೌಢಶಾಲೆಕೊಡ್ಮಾಣ್), ಚರಣ್ ನಾಯ್ಕ್(ಪ್ರೌಢಬಿ.ಮೂಡ), ಸುಧೀಕ್ಷ್(ಪ್ರೌಢಶಾಲೆಬೆಂಜನಪದವು) ಸನ್ಮಾನ ಪಡೆದುಕೊಂಡರು.DSC_0231

ಸಭಾಕಾರ್ಯಕ್ರಮದ ಬಳಿಕ ಯಕ್ಷಜ್ಯೋತಿ ಪ್ರಾಯೋಜಕತ್ವದಲ್ಲಿತರಿಕಿಟ ಕಲಾ ಕಮ್ಮಟ (ರಿ.) ಜ್ಯೋತಿಗುಡ್ಡೆ ಮತ್ತು ಸ್ಥಳೀಯ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಕೂಡುವಿಕೆಯಲ್ಲಿ‘ಮಾಯದಪ್ಪೆ ಮಾನಿಗ’ಎನ್ನುವತುಳು ಯಕ್ಷಗಾನವು ನಡೆಯಿತು.ಪ್ರಸಿದ್ಧ ಕಲಾವಿದರಾದರಾಧಾಕೃಷ್ಣ ನಾವುಡ ಮಧೂರು, ಪದ್ಮನಾಭಉಪಾಧ್ಯಾಯಉದ್ಯಾವರ, ದಿನೇಶ್‍ಕೋಡಪದವು, ಸುನಿಲ್ ಪಲ್ಲಮಜಲುಹಾಗೂ ಇನ್ನಿತರರುಭಾಗವಹಿಸಿದರು.DSC_0088

DSC_0195ಸ್ವರೇಣ್ಯಜ್ಯೋತಿಗುಡ್ಡೆಯವರ ಪ್ರಾರ್ಥನೆ ಮೂಲಕ ಪ್ರಾರಂಭವಾದಕಾರ್ಯಕ್ರಮಕ್ಕೆಉಮೇಶ್‍ರೆಂಜೋಡಿಯವರು ಸ್ವಾಗತ ಮಾಡಿದರು, ಮಲ್ಲಿಕಾಜ್ಯೋತಿಗುಡ್ಡೆಯವರಧನ್ಯವಾದ ಸಮರ್ಪಿಸಿದರು.ನವರಾತ್ರಿಉತ್ಸವದ ಪ್ರಯುಕ್ತವಿವಿಧ ಭಜನಾ ಮಂಡಳಿಗಳ ಸಂಕೀರ್ತನಾ ಸಹಕಾರದೊಂದಿಗೆಏಕಾಹ ಭಜನೆ, ಅಂಬಿಕಾ ಯಕ್ಷಗಾನ ಕಲಾ ಮಂಡಳಿ, ಕಲಾಯಿ ಅಮ್ಮುಂಜೆಇವರಿಂದರಣವೀಳ್ಯ ಎಂಬ ಯಕ್ಷಗಾನ ತಾಳಮದ್ದಲೆಯು ನಡೆಯಿತು.

By suddi9

Leave a Reply

Your email address will not be published. Required fields are marked *