ಶ್ರೀರಾಮ ವಿದ್ಯಾಕೇಂದ್ರದ ಪದವಿಪೂರ್ವ ವಿಭಾಗದಲ್ಲಿ “ಭಾಮತಿ” ವಾಣಿಜ್ಯ ಸಂಘವನ್ನು ದಿನಾಂಕ : 19-07-2017ರಂದು ಮಧ್ಯಾಹ್ನ 3.00ಘಂಟೆಗೆ ಮಂಗಳೂರಿನ ಲೆಕ್ಕಪರಿಶೋಧಕರಾದ ಶ್ರೀಯುತ ಗಣೇಶ ರಾವ್ ಉಧ್ಘಾಟಿಸಿದರು. ನಂತರ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ವಿಚಾರವಾಗಿ ಪ್ರಸ್ತುತ ಅಗತ್ಯತೆ ಹಾಗೂ ಉದ್ಯೋಗಗಳ ಕುರಿತಾದ ಮಾಹಿತಿಯನ್ನು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. 
ಪದವಿಪೂರ್ವ ವಿಭಾಗದ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೆಶಕಿ ಶ್ರೀಮತಿ ಶೋಭ ಮಾತಾಜಿ ಪ್ರಸ್ತಾವಿಸಿ, ಸ್ವಾಗತಿಸಿದರು. ಕು.ಅನುಪಮ ವಂದಿಸಿ ಕು.ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

