ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ(ರಿ) ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ವಲಯದ ಬಿ ಮೂಡ ಕಾರ್ಯಕ್ಷೇತ್ರದ ಆಂಜನೇಯ ಸ್ವ ಸಹಾಯ ಸಂಘದ ಸದಸ್ಯರಾದ ಸಾರಮ್ಮ ಮೃತಪಟ್ಟಿದ್ದು ಅವರ ಸಾಲಕ್ಕೆ ಯೋಜನೆಯಿಂದ ಪ್ರಗತಿನಿಧಿ ಭದ್ರತಾ ವಿಮಾ ಯೋಜನೆಯಡಿ ಮಂಜೂರಾದ 79,693 ಚೆಕ್ನ್ನು ಅವರ ಮಗ ಮಹಮ್ಮದ್ ಮುಸ್ತಾಫ್ರವರಿಗೆ ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯಕ್ ವಿತರಣೆ ಮಾಡಿದರು. ಈ ಸಂದರ್ಭ ವಲಯದ ಮೇಲ್ವಿಚಾರಕ ರಮೇಶ್ ಎಸ್, ಸೇವಾಪ್ರತಿನಿಧಿ ನಂದಿನಿ, ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ, ಕಾರ್ಯದರ್ಶಿ ಮಮತಾ, ಪುಷ್ಪಾ, ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
