ಬಂಟ್ವಾಳ: ಯು.ಪಿ ಎಸ್.ಸಿ. ಪರೀಕ್ಷೆಯಲ್ಲಿ ರಾಜಕ್ಕೆ ಮೂರನೇ ಸ್ಥಾನಗಳಿಸಿ ಐಎಎಸ್ ಅ„ಕಾರಿಯಾದ ನವೀನ್ ಭಟ್ ಮತ್ತು ಸಾರಿಗೆ ಸಂಸ್ಥೆಯಿಂದ ನಿವೃತ್ತಗೊಂಡ ಅಪಘಾತ ರಹಿತ ಸೇವೆ ಮಾಡಿ ಮುಖ್ಯಮಂತ್ರಿಗಳ ಚಿನ್ನದ ಪದಕ, ಸಾರಿಗೆ ಸಂಸ್ಥೆಯ ಬೆಳ್ಳಿಯ ಪದಕ ಪಡೆದಿರುವ ಬಸ್ ಚಾಲಕ ಶ್ರೀಧರ್ ಅವರಿಗೆ ರೋಟರಿ ಕ್ಲಬ್ ಬಂಟ್ವಾಳ ನೂತನ ಪದಾ„ಕಾರಿಗಳ ಪದಗ್ರಹಣದಲ್ಲಿ ಗುರುತಿಸಿ ಸಮ್ಮಾನಿಸಲಾಯಿತು.
ರೋಟರಿ ಜಿಲ್ಲೆ 3181ರ ನಿಯೋಜಿತ ಜಿಲ್ಲಾ ಗವರ್ನರ್ ರೋ| ರೋಹಿನಾಥ್ ಪಾದೆ, ಜಿಲ್ಲಾ ಕ್ಲಬ್ ವಿಸ್ತರಣೆ ಚಯರ್ಮೆನ್ ಡಾ| ಅರವಿಂದ ಭಟ್ ಕೆ.ಜಿ., ಸಹಾಯಕ ಗವರ್ನರ್ ಎ.ಎಂ. ಕುಮಾರ್, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ, ಕಾರ್ಯದರ್ಶಿ ನಾರಾಯಣ ಹೆಗ್ಡೆ , ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ರಿತೇಶ್ ಬಾಳಿಗ, ಸಾರ್ಜಂಟ್ ಆಗಿ ಚಂದ್ರಹಾಸ ಗಾಂಭೀರ, ಲೋಕೋಪಯೋಗಿ ಸ.ಕಾ.ನಿ. ಇಂಜಿನಿಯರ್ ಉಮೇಶ್ ಭಟ್, ವಲಯ ಸೇನಾನಿ ಕರುಣಾಕರ ರೈ ಉಪಸ್ಥಿತರಿದ್ದಾರೆ.
