ಕೈಕಂಬ : ರಾಜೇಶ್ ನಾಯ್ಕ್ ಎಂಬ ಹೆಸರು ಕೇಳದವರು ಬಂಟ್ವಾಳ ಪರಿಸರದಲ್ಲಿ ಇರಲಿಕ್ಕಿಲ್ಲ ಬಿಡಿ . ಬಿಜೆಪಿ ಮುಖಂಡರಾಗಿದ್ದುಕೊಂಡು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡವರು.ಜೊತೆಗೆ ಪ್ರಗತಿಪರ ಕೃಷಿಕರೂ ಸಹಾ . ಜುಲೈ 11 ಇವರ ಜನ್ಮದಿನ ಹಾಗಾಗಿ ಇವರ ಮೇಲಿನ ಪ್ರೀತಿಗಾಗಿ ಇವರ ಅಭಿಮಾನಿಗಳು ಇವರ ಜನ್ಮದಿನದ ಜಾಹಿರಾತುಗಳನ್ನು ಮಾದ್ಯಮಗಳಲ್ಲಿ ಪ್ರಕಟಿಸುವ ಮೂಲಕ ತಮ್ಮ ನಾಯಕನಿಗೆ ತಮ್ಮ ಪ್ರೀತಿಯನ್ನು ಸಲ್ಲಿಸಬೇಕೆಂದುಕೊಂಡಿದ್ದರು.

rajesh naik image

ಆದರೆ ಈ ವಿಚಾರ ಹೇಗೊ ರಾಜೇಶ್ ನಾಯ್ಕರ ಕಿವಿ ತಲುಪಿತು. ಕೂಡಲೇ ಅವರು ತಮ್ಮ ಅಭಿಮಾನಿಗಳಿಗೆ ಮಾತೊಂದನ್ನು ತಿಳಿಸಿಬಿಟ್ಟಿದ್ದರು. ” ನೀವು ನನ್ನ ಮೇಲಿಟ್ಟಿರುವ ಪ್ರೀತಿಗೆ ನಾನು ಚಿರಋಣಿ ಆದರೆ ಈ ಸಂದರ್ಭದಲ್ಲಿ ನೀವು ನನ್ನ ಜಾಹಿರಾತನ್ನು ದಯವಿಟ್ಟು ಪ್ರಕಟಿಸಬೇಡಿ ಬದಲಿಗೆ ಆ ಜಾಹಿರಾತಿನ ಮೊತ್ತವನ್ನು ಮೃತಪಟ್ಟಿರುವ ಸಂಘದ ಕಾರ್ಯಕರ್ತ ಶರತ್‍ರ ಕುಟುಂಬದವರಿಗೆ ನೀಡಿ ಏಕೆಂದರೆ ಕುಟುಂಬದ ಆಧಾರಸ್ಥಂಭವನ್ನು ಕಳೆದುಕೊಂಡ ಆ ಕುಟುಂಬದ ನಿರ್ವಹಣೆಗೆ ಹಣದ ಅವಶ್ಯಕತೆ ಬಹಳ ಇದೆ “ಎಂದುಬಿಟ್ಟರು. ಜೊತೆಗೆ ತನ್ನ ಸಾಮಾಜಿಕ ಕಾಳಜಿಯನ್ನು ಎತ್ತಿ ಹಿಡಿದು ರಾಜಕೀಯ ನಾಯಕರ ಸಾಲಿನಲ್ಲಿ ಮೇಲ್ಪಂಕ್ತಿಯ ಸ್ಥಾನವನ್ನು ಪಡೆದಿದ್ದಾರೆ ಎನ್ನಬಹುದು.

By suddi9

Leave a Reply

Your email address will not be published. Required fields are marked *