ಬಂಟ್ವಾಳ :ಕಳೆದ ಒಂದು ತಿಂಗಳಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಬಂಟ್ವಾಳಕ್ಕೆ ವಿಶೇಷ ಕರ್ತವ್ಯ ನಿರ್ವಹಿಸಲು ಚಿಕ್ಕಮಗಳೂರು ಜಿಲ್ಲೆಯ ಎಸ್ಪಿ ಅಣ್ಣಾಮಲೈ ಅವರು ಬುಧವಾರ ಸಂಜೆ ಬಂಟ್ವಾಳಕ್ಕೆ ಬಂದಿಳಿದಿದ್ದಾರೆ.
ಬಂಟ್ವಾಳ ನಗರ ಠಾಣೆಗೆ ತನ್ನ ತಂಡದೊಂದಿಗೆ ಬಂದು ಬಳಿಕ ಮಾರಿಪಳ್ಳ,ಪರಂಗೀಪೇಟೆ ಮೊದಲಾದೆಡೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಬುಧವಾರ ಬೆಂಜನಪದವಿನಲ್ಲಾದ ಕೊಲೆ ಕ್ರತ್ಯದ ಬಳಿಕ ತಾಲೂಕಿನ ವಿವಿಧ ಪರಿಸರದಲ್ಲಿ ಆತಂಕಿತ ವಾತವಾರಣ ಕಂಡುಬಂದ ಹಿನ್ನಲೆಯಲ್ಲಿ ರಫ್ ಅ್ಯಂಡ್ ಟಫ್ ಪೊಲೀಸ್ ಅಧಿಕಾರಿ ಎಸ್ಪಿ ಅಣ್ಣಾಮಲೈ ಅವರನ್ನು ವಿಶೇಷ ಕರ್ತವ್ಯಕ್ಕಾಗಿ ಇಲ್ಲಿಗೆ ಕರೆಸಲಾಗಿದೆ.
