ಬಂಟ್ವಾಳ; ಕಲ್ಲಡ್ಕ 10.06.2017ರಂದು ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕಇಲ್ಲಿ ಹಿಂದೂ ಸಾಮ್ರಾಜ್ಯೋತ್ಸವಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯಅತಿಥಿ ಶ್ರೀರಾಮ ಪದವಿ ಕಾಲೇಜಿನಕನ್ನಡ ಉಪನ್ಯಾಸಕ ಯತಿರಾಜ್ ಮಾತನಾಡಿ, ಹಿಂದೂಧರ್ಮ ಸನಾತನವಾದುದು, ಯಾವುದೇ ಕಟ್ಟುಪಾಡುಗಳಿಲ್ಲದೆ ಸಮೃದ್ಧವಾದುದು, ಹಿಂದೂಧರ್ಮಕ್ಕೆ ಪುನಶ್ಚೇತನನೀಡಿದವರು
ಛತ್ರಪತಿ ಶಿವಾಜಿ ಮಹಾರಾಜರು.ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ಹಿಂದೂ ಸಮಾಜಕ್ಕೆದಾರಿದೀಪವಾಗಬೇಕೆಂದು ಮಕ್ಕಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಅಧ್ಯಕ್ಷ ನ್ಯಾಯವಾದಿ ಶಿವಗಿರಿ ಸತೀಶ್ ಭಟ್, ಮುಖ್ಯೋಪಾಧ್ಯಾಯರು ರವಿರಾಜ್ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೇಹಾ ಮಾತಾಜಿ ನಿರೂಪಿಸಿ, ಸೌಮ್ಯ ಮಾತಾಜಿ ಸ್ವಾಗತಿಸಿ, ಶಶಿಕಲಾ ಮಾತಾಜಿ ಧನ್ಯವಾದಗೈದರು.
