ಬಂಟ್ವಾಳ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಂಚಿ – ಕೊಳ್ನಾಡು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಧಾರ್ಮಿಕ ಮುಖಂಡ, ಸಂಘಟಕ ಕೈಯ್ಯೂರು ನಾರಾಯಣ ಭಟ್ ಆಯ್ಕೆಯಾಗಿದ್ದಾರೆ.ಸದಸ್ಯರಾಗಿ ರವಿ ಪ್ರಸಾದ ಮರಡಿತ್ತಾಯ ವನ ಭೋಜನ ವಿಟ್ಲ, ಸೂರ್ಯನಾರಾಯಣ ಭಟ್ ಎಂ.ಟಿ. ಮಂಚಿ, ಸಿ.ಎಚ್. ಸೀತಾರಾಮ ಶೆಟ್ಟಿ ಮಂಚಿ, ಲಕ್ಷ ್ಮಣ ಶೆಟ್ಟಿಗಾರ ಮಂಚಿ, ರಾಜೇಂದ್ರ ಕೊಟ್ಟಾರಿ ಮಂಚಿ, ಜಗನ್ನಾಥ ನಾಯ್ಕ ನೂಜಿಬೈಲು, ಜಯಂತಿ ಕೆ. ಶೆಟ್ಟಿ ಚೌಕ, ನಳಿನಾಕ್ಷಿ ಕೋಕಲ ಆಯ್ಕೆಯಾಗಿದ್ದಾರೆ.

