ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಮಹಮ್ಮದೀಯ ಜುಮಾ ಮಸೀದಿ ಮತ್ತು ತಕ್ವಿಯತುಲ್ ಇಸ್ಲಾಂ ಮದ್ರಸದ ಅಧ್ಯಕ್ಷರಾಗಿ ಬದ್ರುದ್ದೀನ್ ಕೈಯೂರು ಅವರು ಸತತ 15ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
ಇತ್ತೀಚೆಗೆ ಶೈಖುನಾ ಮಂಚಿ ಉಸ್ತಾದ್ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ಶಾಫಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಗ್ರೈಂಡರ್, ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್ ಎಂ., ಜೊತೆ ಕಾರ್ಯದರ್ಶಿಯಾಗಿ ರಫೀಕ್ ಝುಹ್ರಿ, ಕೋಶಾಧಿಕಾರಿಯಾಗಿ ಹೈದರಾಲಿ ಎಂ.ಎಚ್., ಲೆಕ್ಕ ಪರಿಶೋಧಕರಾಗಿ ಅಬ್ದುಲ್ಲ ಎಂ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಂಝ ಸೈಟ್, ಅಹ್ಮದ್ ದರ್ಖಾಸ್, ಇಸುಬು ಎಸ್ಟಿಡಿ, ಉಸ್ಮಾನ್ ದರ್ಖಾಸ್, ಅಝೀಝ್ ಮದನಿ, ಅಬ್ದುಲ್ ಖಾದರ್ ಸೈಟ್ ಅವರನ್ನು ಆರಿಸಲಾಯಿತು.
