ಮಂಗಳೂರು:ಸರ್ಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಲಕ್ಷ ರು. ಅನುದಾನದಲ್ಲಿ ನವೀಕರಣಗೊಂಡ ಜೆಪ್ಪಿನಮೊಗರು ಸರಕಾರಿ ಶಾಲೆಯ ಶೌಚಾಲಯವನ್ನು ಉದ್ಘಾಟಿಸಿ ಹಸ್ತಾಂತರಿಸಲಾಯಿತು.

ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಜೆ. ನಾಗೇಂದ್ರ ಕುಮಾರ್, ಶಶಿಕಾಂತ್ ಶೆಟ್ಟಿ, ನವೀನ್ ಸ್ಟೀವನ್, ಕಾರ್ಪೋರೇಟರ್ ಭಾಸ್ಕರ್ ರಾವ್, ಮುಖ್ಯೋಪಾಧ್ಯಾಯಿನಿ ಅನುಸೂಯ, ಸತ್ಯವತಿ ಕಂರ್ಬೆಟ್ಟು, ಇಮ್ತಿಯಾಸ್ ಕಾಡಬರಿ, ಪ್ರಕಾಶ್ ಕೊಟ್ಟಾರಿ, ಪ್ರವೀಣ್ ಸುವರ್ಣ, ಶೈಲೇಶ್ ಭಂಡಾರಿ ತಾರ್ದೋಲ್ಯ, ಯಶವಂತಿ, ಚಂದ್ರಶೇಖರ್ ಕಿಲ್ಲೆ, ಪ್ರಾಣೇಶ್ ಇದ್ದರು.
ಶಾಲಾ ಶಿಕ್ಷಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸಂಧ್ಯಾ ವಂದಿಸಿದರು.
